ಉಸಾಮಃ ಬಿನ್ ಲಾದನ್ ಓರ್ವ ನೀಚ ಶೈತಾನ್ ಆಗಿದ್ದಾನೆ : ಅಶ್ಶೈಖ್ ಅಹ್ಮದ್ ಬಿನ್ ಯಹ್ಯಾ ಅನ್ನಜ್ಮೀ

w

ಉಗ್ರವಾದಿಗಳ ವಿರುದ್ಧ ಸಲಫೀ ವಿದ್ವಾಂಸರ ಎಚ್ಚರಿಕೆಗಳು


ಸೌದಿ ಅರೇಬಿಯಾದ ಶ್ರೇಷ್ಠ ಸಲಫೀ ವಿದ್ವಾಂಸರಾದ ಅಶ್ಶೈಖ್ ಅಹ್ಮದ್ ಬಿನ್ ಯಹ್ಯಾ ಅನ್ನಜ್ಮೀ (V) ಹೇಳಿದರು :‏

“ಉಸಾಮಃ ಬಿನ್ ಲಾದನ್ ಓರ್ವ ನೀಚ ಶೈತಾನ್ ಆಗಿದ್ದಾನೆ. ಆತನೊಬ್ಬ ಖವಾರಿಜ್ ಉಗ್ರವಾದಿಯಾಗಿದ್ದಾನೆ. ಅವನನ್ನು ಯಾರೊಬ್ಬರೂ ಕೂಡ ಪ್ರಶಂಸಿಸಬಾರದು. ಯಾರು ಅವನನ್ನು ಪ್ರಶಂಸಿಸುವರೋ ಅವನೂ ಸಹ ಇವನಂತೆ ಇರುವ ಖವಾರಿಜ್ ಉಗ್ರವಾದಿಯಾಗಿರುವನು. ಯಾರಾದರೂ ಅವನನ್ನು ಪ್ರಶಂಸಿಸುವುದಾದರೆ ಅವನೂ ಸಹ ಖವಾರಿಜ್ ಉಗ್ರವಾದಿಯೆಂದು ಅದು ಸಾಬೀತುಪಡಿಸುತ್ತದೆ.

ಟಿಪ್ಪಣಿ: ಖವಾರಿಜ್ ಎಂದರೆ ಪ್ರವಾದಿಯ ಸಹಚರರಾದ ಸಹಾಬಿಗಳ ವಿರುದ್ಧ ಬಂಡಾಯವೆದ್ದು, ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾದವರ ಹೆಸರಾಗಿದೆ. ಖವಾರಿಜ್‌ಗಳನ್ನು ನರಕದ ನಾಯಿಗಳೆಂದು ಪ್ರವಾದಿ ಮುಹಮ್ಮದ್ (H) ರವರು ಪರಿಗಣಿಸಿರುವರು. (ನೋಡಿರಿ ಸುನನ್ ಇಬ್ನ್ ಮಾಜಃ : 143)

ಅನುವಾದ : ಅಬೂ ಹಮ್ಮಾದ್

ಹೆಚ್ಚಿನ ಓದಿಗಾಗಿ : 

ಆತ್ಮಹತ್ಯಾ ದಾಳಿಗಳ ವಿರುದ್ಧ ಇಸ್ಲಾಮಿನ ಸ್ಪಷ್ಟ ನಿಲುವು -ಅಶ್ಶೈಖ್ ಸಾಲಿಹ್ ಅಲ್-ಫೌಝಾನ್ (حَفِظَهُ اللَّهُ) ಹಿರಿಯ ವಿದ್ವಾಂಸರು, ಸೌದಿ ಅರೇಬಿಯಾ.

ಇಸ್ಲಾಮ್ ಭಯೋತ್ಪಾದನೆಯಿಂದ ಮುಕ್ತವಾಗಿದೆ -ಅಶ್ಶೈಖ್ ಹಾಮಿದ್ ಬಿನ್ ಖಮೀಸ್ ಅಲ್-ಜುನೈಬೀ (حَفِظَهُ اللَّهُ) ಮತ್ತು ಅಶ್ಶೈಖ್ ಡಾ. ಮುಹಮ್ಮದ್ ಬಿನ್ ಘಾಲಿಬ್ ಅಲ್-ಉಮರೀ (حَفِظَهُ اللَّهُ)

ಭಯೋತ್ಪಾದನೆಯನ್ನು ಇಸ್ಲಾಮ್ ಕಟುವಾಗಿ ಖಂಡಿಸುತ್ತದೆ -ಅಬೂ ಹಮ್ಮಾದ್ 

ಖವಾರಿಜ್‍ಗಳು ಯಾರು? -ವಿವಿಧ ಸಲಫೀ ವಿದ್ವಾಂಸರು ನೀಡಿದ ಎಚ್ಚರಿಕೆಗಳು